ಕೊಡವ ಭಾಷೆಯ ಚೀತೆ ಸಫಲ

ಕೊಡಗಿನಲ್ಲಿ ನೆಲೆನಿಂತ ಮೂಲನಿವಾಸಿ ಯರವ ಜನಾಂಗ (ಪರಿಶಿಷ್ಟ ಜಾತಿ) ಕುಡಿತದ ಮೂಲಕ ಅಧೋಗತಿಗೆ ತಲುಪಿರುವುದನ್ನು ಪ್ರತಿಬಿಂಬಿಸುವಲ್ಲಿ ಯರವ ಮತ್ತು ಕೊಡವ ಭಾಷೆಯಲ್ಲಿ ಮೂಡಿ ಬಂದ `ಚೀತೆ' (ಯರವ ಜನಾಂಗದ ಮಹಿಳೆ ಹೆಸರು) ನಾಟಕ ಸಫಲವಾಯಿತು.
ಒಂದು ನಾಟಕದಲ್ಲಿ ಎರಡು ಭಾಷೆಯನ್ನು ಸರಿಸಮಾನವಾಗಿ ಬಳಸಿ ನಾಟಕ ಪ್ರಸ್ತುತ ಪಡಿಸಿದ್ದು ವಿಶೇಷ. ಯರವ ಜನಾಂಗದ ದುರಂತಕ್ಕೆ ಕಾರಣ ಯಾರು? ಎಂಬ ಪ್ರಶ್ನ್ನೆ ನಾಟಕ ವೀಕ್ಷಿಸಿದವರನ್ನು ಕಾಡಿಸಿದ್ದು ನಿಜ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನಾಟಕ ಕಲಿಕೆ ಯೋಜನೆಯಡಿ `ಸೃಷ್ಟಿ ಕೊಡಗು ರಂಗ'ದ ಅಡ್ಡಂಡ ಸಿ. ಕಾರ್ಯಪ್ಪನವರ ಪರಿಕಲ್ಪನೆ ಮತ್ತು ನಿರ್ದೇಶನವಿದ್ದ `ಚೀತೆ' ಪ್ರದರ್ಶನಗೊಂಡಿದ್ದು ನ.೯ ರಂದು ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದಲ್ಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ